ನಾಗೇಶ್ ಹೆಗಡೆ: ಒಂದೆಡೆ ಒಡೆಯುವ, ಇನ್ನೊಂದೆಡೆ ಬೆಸೆಯುವ ಯತ್ನ
Sunday, November 8th, 2009ಒಂದೇ ಬಣಕ್ಕೆ ಸೇರಿದವರು ಎರಡು ಗುಂಪುಗಳಾಗಿ ಒಡೆದು ಪರಸ್ಪರ ಮುಖಾಮುಖಿಯಾದಾಗ ಏನಾಗುತ್ತದೆ? ಅದು ‘ಸ್ಫೋಟಕ ಸ್ಥಿತಿ’ ಎಂದು ಮಾಧ್ಯಮಗಳು ಬಣ್ಣಿಸುತ್ತವೆ.
ಒಂದೇ ಬಣಕ್ಕೆ ಸೇರಿದವರು ಎರಡು ಗುಂಪುಗಳಾಗಿ ಒಡೆದು ಪರಸ್ಪರ ಮುಖಾಮುಖಿಯಾದಾಗ ಏನಾಗುತ್ತದೆ? ಅದು ‘ಸ್ಫೋಟಕ ಸ್ಥಿತಿ’ ಎಂದು ಮಾಧ್ಯಮಗಳು ಬಣ್ಣಿಸುತ್ತವೆ.
ರಾಜ್ಯ ಬಿಜೆಪಿಯಲ್ಲಿ ೧೪ ದಿನಗಳ ಕಾಲ ನಡೆದ ರೆಡ್ಡಿ – ಯೆಡ್ಡಿ ಜಗಳದಲ್ಲಿ ಕರ್ನಾಟಕದ ಜನತೆ ಬಡವಾಗಿದ್ದಾಯ್ತು. ರೆಡ್ಡಿ – ಯೆಡ್ಡಿ ನಡುವಣ ರಾಜಿ ಸೂತ್ರದ ವಿವರಗಳಿನ್ನೂ ಗೊತ್ತಾಗಿಲ್ಲ. ಅಷ್ಟರಲ್ಲೇ ಈ ಬ್ಲಾಗ್ ಬರೆಯೋ ಮದ ನನಗೆ ಬಂದಿದೆ!
ನನ್ನ ಪ್ರಿಯ ನಾಯಕರಲ್ಲಿ ಒಬ್ಬರಾದ ಸನ್ಮಾನ್ಯ ಯಡ್ಯೂರಪ್ಪನವರಿಗೆ,
ಮತ್ತೆ ಮತ್ತೆ ನೀವು ರೆಡ್ಡಿ – ಚೆಡ್ಡಿ ಎಂಬ ಎರಡು ವಿಭಿನ್ನ ರಾಜಕೀಯ ತಳಹದಿಗಳ ನಡುವೆ ಸಿಲುಕಿಕೊಂಡಿರುವುದನ್ನು ನೋಡಿ ನನಗೆ ತುಂಬಾ ಬೇಸರವಾಗಿದೆ. ರೆಡ್ಡಿ ರಾಜಕೀಯ ಮುಖ್ಯತಃ ಅವರ ಸಾಮ್ರಾಜ್ಯ ಸಂರಕ್ಷಣೆಗೆ ಸಂಬಂಧಿಸಿದ್ದು; ಆದರೆ ಚೆಡ್ಡಿಗಳ ಕಾಳಜಿ ಇರೋದು ಅವರು ನಂಬಿಕೊಂಡು ಬಂದಿರುವ ಸಿದ್ಧಾಂತಗಳಲ್ಲಿ. ಸಿದ್ಧಾಂತವನ್ನು ದಶಕಗಟ್ಟಳೆ ಬೋಧನೆ ಮಾಡಿದರೂ, ರಿಯಲ್ಪಾಲಿಟಿಕ್ ಮಾಡುವುದಕ್ಕೆ ರೆಡ್ಡಿ ರಾಜಕೀಯವೂ ಬೇಕೇನೋ ಎಂಬಂತೆ ಕಳೆದ ಹತ್ತು ವರ್ಷಗಳಿಂದ ಮೌನ ವಹಿಸಿಕೊಂಡು ಬಂದಿರುವ ಸಂಘಪರಿವಾರ ಈಗ [...]