ಇಂಟರ್ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
Friday, October 23rd, 2009ನಾನು ೨೦೦೫ರ ಏಪ್ರಿಲ್ ೧೨ರಂದು ಚಂದನ ದೂರದರ್ಶನ ವಾಹಿನಿಯ ‘ಬೆಳಗು’ ಕಾರ್ಯಕ್ರಮದಲ್ಲಿ ಲೈವ್ ಸಂದರ್ಶನಕ್ಕೆ ಒಳಗಾಗಿದ್ದೆ!
ನಾನು ೨೦೦೫ರ ಏಪ್ರಿಲ್ ೧೨ರಂದು ಚಂದನ ದೂರದರ್ಶನ ವಾಹಿನಿಯ ‘ಬೆಳಗು’ ಕಾರ್ಯಕ್ರಮದಲ್ಲಿ ಲೈವ್ ಸಂದರ್ಶನಕ್ಕೆ ಒಳಗಾಗಿದ್ದೆ!
ಅಕ್ಟೊಬರ್ 17 ರಂದು ನಮ್ಮ ತಲಕಾವೇರಿಯಲ್ಲಿ ತೀರ್ಥೋದ್ಭವ ಆಗುತ್ತಿದ್ದಾಗ, ಅತ್ತ ಮಾಲ್ಡೀವ್ಸ್ ಎಂಬ ದ್ವೀಪರಾಷ್ಟ್ರದ ಹನ್ನೆರಡು ಸಂಸದರು ಸಮುದ್ರ ತಳದಲ್ಲಿ ಕೂತು ಸಂಪುಟ ಸಭೆ ನಡೆಸಿದರು. ಮೈತುಂಬ ರಬ್ಬರ್ ಉಡುಗೆ ಧರಿಸಿ, ಬೆನ್ನಿಗೆ ಆಮ್ಲಜನಕದ ಸಿಲಿಂಡರ್ ಬಿಗಿದು, ಕಾಲಿಗೆ ಜಾಲಪಾದರಕ್ಷೆ ಸಿಕ್ಕಿಸಿಕೊಂಡು, ನೀರೊಳಕ್ಕೆ ಮುಳುಗಿ ಕೈಸನ್ನೆಗಳ ಮೂಲಕ ಹನ್ನೆರಡು ನಿಮಿಷಗಳ ಸಾಂಕೇತಿಕ ಸಭೆ ನಡೆಸಿ ಮೇಲೆದ್ದು ಬಂದರು. ‘ಭೂಮಿಯ ತಾಪಮಾನ ಹೀಗೆಯೇ ಏರುತ್ತಿದ್ದರೆ ನಮ್ಮ ಇಡೀ ದೇಶ ಮುಳುಗಿ ಹೋಗುತ್ತದೆ; ನಮ್ಮನ್ನು ನಡುನೀರಲ್ಲಿ ಕೈಬಿಡಬೇಡಿ’ ಎಂಬ ಆರ್ತ [...]
ನಾನು ಓದಿದ ಶಾಲೆಯನ್ನು ನಾನು ಇತ್ತೀಚೆಗೆ ನೋಡಿದ್ದು ೨೦೦೯ರ ಮೇ ತಿಂಗಳಿನಲ್ಲಿ. ಪಶ್ಚಿಮಘಟ್ಟದ ಉದ್ದಕ್ಕೂ ಹರಡಿಕೊಂಡಿರೋ ನಾನು ಓದಿದ ಶಾಲೆಗಳೆಲ್ಲವನ್ನೂ ನೋಡಬೇಕು ಎಂದು ನಾನು ಎಂದೋ ಕಂಡ ಕನಸು ಆಗ ಬಹುತೇಕ ಕೈಗೂಡಿತು. ಕೆಲವು ಊರುಗಳಲ್ಲಿ ನನ್ನ ಶಾಲೆಯನ್ನು ಹುಡುಕುವುದೇ ದೊಡ್ಡ ಕೆಲಸವಾಯಿತು!
ಸದ್ಯಕ್ಕೆ ಇವರನ್ನು ದತ್ತಾಜಿ ಅಮ್ಮ ಎಂದೇ ಕರೆಯೋಣ. ಅವರನ್ನು ನಾನು ಎಷ್ಟೋ ವರ್ಷಗಳಿಂದ ನೋಡುತ್ತಿದ್ದೇನೆ. ಎಂದೂ ಅವರ ಮುಖದಲ್ಲಿ ಜೀವನೋತ್ಸಾಹ ಮಾಸಿದ್ದು ಕಂಡಿಲ್ಲ. ಕಿವಿ ಕೈ ಕೊಟ್ಟರೂ ಕಣ್ಣು ಸೂಕ್ಷ್ಮ. ಬದುಕನ್ನು ನೋಡುವ, ಅನುಭವಿಸುವ ಹೃದಯವೂ ಸೂಕ್ಷ್ಮ.
ಕ್ರೈಸ್ತ ಮತಪ್ರಚಾರ, ಸಾಮ್ರಾಜ್ಯಶಾಹಿ ಆಳ್ವಿಕೆ, ಗುಲಾಮಗಿರಿ, ಸಂಪತ್ತಿನ ಲೂಟಿ, ನರಮೇಧ – ಇವೆಲ್ಲವೂ ೧೫ನೇ ಶತಮಾನದಿಂದ ಇಂದಿನವರೆಗೂ ಏಶ್ಯಾ, ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ ಖಂಡಗಳನ್ನು ವ್ಯಾಪಿಸಿವೆ. ಇಂದು ಮಾನವಹಕ್ಕುಗಳ ಬಗ್ಗೆ ವಿಪರೀತ ಮಾತಾಡುತ್ತಿರುವ, ಶಾಂತಿಮಂತ್ರವನ್ನು ಬೋಧಿಸುತ್ತಿರುವ ಐರೋಪ್ಯ ದೇಶಗಳೇ ಈ ಎಲ್ಲ ಅಪಚಾರಗಳಿಗೆ ಹೊಣೆಯಾಗಿವೆ ಎಂಬುದನ್ನು ಮರೆಯಲಾದೀತೆ? ಕಳೆದ ವಾರ ಓಮರ್ ಮುಖ್ತರ್ ಬಗ್ಗೆ ಬರೆದಾಗ ಇಟಲಿಯ ನರಮೇಧವನ್ನು ತಿಳಿದುಕೊಂಡೆವು. ಈ ಸಲ ‘ದಿ ಮಿಶನ್’ ಎಂಬ ಇನ್ನೊಂದು ಸಿನೆಮಾದ ಮೂಲಕ ದಕ್ಷಿಣ ಅಮೆರಿಕಾದಲ್ಲಿ ನಡೆದಿದ್ದ ಭೀಕರ [...]
ಜೆಹಾದಿ (ಇಸ್ಲಾಮಿಕ್ ಧರ್ಮಯುದ್ಧ ಎಂದುಕೊಳ್ಳುವಾ) ಅಂದಕೂಡಲೇ ಹಲವರ ಮನಸ್ಸಿನಲ್ಲಿ ಎಂಥದೋ ವಿಕ್ಷಿಪ್ತ ಭಾವ ಮೂಡುತ್ತೆ. ಸಹಜವೇ. ಇವತ್ತು ಜೆಹಾದಿ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ತಾಲಿಬಾನ್, ಅಲ್ ಖೈದಾಗಳ ಉಗ್ರಗಾಮಿ ಕೃತ್ಯಗಳು ನಮ್ಮನ್ನು ಧೃತಿಗೆಡಿಸಿವೆ.
ಎಂಡೋಸಲ್ಫಾನ್: ಹೆಸರು ಕೇಳಿದರೆ ನಮ್ಮ ಮೈ ನಡುಗಬೇಕಾಗಿತ್ತು.