Archive for June, 2009

ಮಿತ್ರಮಾಧ್ಯಮದಿಂದ `ಶಿಲ್ಪಶ್ರೀ ತನಿಖಾ ವರದಿ ಪ್ರಶಸ್ತಿ ೨೦೧೦’

Thursday, June 25th, 2009

 ಪ್ರತಿಭಾನ್ವಿತ ಪತ್ರಕರ್ತೆ ದಿ. ಶಿಲ್ಪಶ್ರೀ ನೆನಪಿನಲ್ಲಿ ಮಿತ್ರಮಾಧ್ಯಮವು ತನಿಖಾ ವರದಿ ಪ್ರಶಸ್ತಿಯನ್ನು ಸ್ಥಾಪಿಸಿದೆ. ೨೦೦೯ರ ಆಗಸ್ಟ್ ೧೫ರಿಂದ ೨೦೧೦ರ ಆಗಸ್ಟ್ ೧೫ರ ಅವಧಿಯಲ್ಲಿ ಪ್ರಕಟವಾಗುವ ಕನ್ನಡದ ಅತ್ಯುತ್ತಮ ತನಿಖಾ ವರದಿಗೆ ಪ್ರಪ್ರಥಮ `ಶಿಲ್ಪಶ್ರೀ ತನಿಖಾ ವರದಿ ಪ್ರಶಸ್ತಿ’ಯನ್ನು ನೀಡಲಾಗುವುದು. ಈ ಪ್ರಶಸ್ತಿಯು ಆರಂಭದಲ್ಲಿ ೫೦ (ಐವತ್ತು) ಸಾವಿರ ರೂ.ಗಳ ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ. ಮುಂದಿನ ವರ್ಷಗಳಲ್ಲಿ ಈ ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸುವ ಉದ್ದೇಶವಿದೆ.
[...]

ಗತಕಾಲದ ಸ್ಮರಣೆ, ವಿಸ್ಮರಣೆ : ಆಡ್ವಾನಿಜಿಗೊಂದು ಪತ್ರ

Wednesday, June 24th, 2009

ಇವರಿಗೆ,
ಶ್ರೀ ಎಲ್. ಕೆ. ಆಡ್ವಾನಿಜಿ,
ಲೋಕಸಭೆಯ ಮಾನ್ಯ ಪ್ರತಿಪಕ್ಷ ನಾಯಕರು
ಕ್ಯಾಂಪ್ : ೨೨ ಸಾವಿರ ರೂ. ದಿನಬಾಡಿಗೆಯ ಯಾವುದೋ ಒಂದು ಕೊಠಡಿ
ಆರೆಂಜ್ ಕೌಂಟಿ
ಕರಡಿಗೋಡು ಪೋಸ್ಟ್
ಸಿದ್ದಾಪುರ
ಕೊಡಗು ಜಿಲ್ಲೆ ೫೭೧೨೫೩
ಪ್ರಿಯ ಆಡ್ವಾನಿಜಿ,
ಇತಿಹಾಸ ಆಗುವುದು ಬೇರೆ, ಬರೆಯುವುದು ಬೇರೆ, ನೆನಪಿಸಿಕೊಳ್ಳುವುದು ಬೇರೆ. ಅಲ್ಲವೆ ಆಡ್ವಾನಿಜಿ……. ?
ಕಳೆದ ವರ್ಷ ಇದೇ ದಿನ, ಜೂನ್ ೨೫ರಂದು ನೀವು ಬೆಂಗಳೂರಿನಲ್ಲಿದ್ದಿರಿ. ಫ್ರೀಡಂ  ಪಾರ್ಕ್ ಉದ್ಘಾಟಿಸಲು. ಅದೇ, ನೀವೇ ಬರೆದಿದ್ದೀರಿ, ಒಂದು ಕಾಲದಲ್ಲಿ ಬೆಂಗಳೂರು ಸೆಂಟ್ರಲ್ ಜೈಲಾಗಿತ್ತು. ನೀವಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬಂಧಿಯಾಗಿದ್ದಿರಿ. ಎಷ್ಟೋ ವರ್ಷಗಳಿಂದ ಅದೇ ದಿನ, [...]

ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’

Wednesday, June 24th, 2009

ಡ್ರಗ್ ಟ್ರಾಫಿಕಿಂಗ್ ಮತ್ತು ವುಮೆನ್ ಟ್ರಾಫಿಕಿಂಗ್ ಕುರಿತ ಹಲವು ಸಿನೆಮಾಗಳು ಹಾಲಿವುಡ್‌ನಲ್ಲಿ ತಯಾರಾಗಿವೆ. ೨೦೦೧ರಲ್ಲಿ ಬಂದ ಟ್ರಾಫಿಕ್ ಸಿನೆಮಾ ಕಲಾತ್ಮಕತೆಯಲ್ಲೂ ಮಿಂಚಿದ ಅಪರೂಪದ ಚಿತ್ರ. ಇದರಲ್ಲಿ ಡ್ರಗ್ ಕಥೆ ಇದೆ. ಹಲವರು ಇದನ್ನು ಸ್ಟೀವನ್ ಸೋಡೆರ್‌ಬಗ್‌ನ ಮಾಸ್ಟರ್‌ಪೀಸ್ ಎಂದೂ ಕರೆಯುತ್ತಾರೆ.

ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧

Wednesday, June 24th, 2009
ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧

ಇಂಡಸ್, ಸಿಂಧು, ಇಂಡಿಯಾ, – ಯಾರನ್ನು ಕಾಡಿಲ್ಲ? ಇಂಗ್ಲೆಂಡ್ ಮೂಲದ ಪತ್ರಕರ್ತೆ ಅಲಿಸ್ ಅಲ್ಬೀನಿಯಾಗೂ ಸಿಂಧೂ ನದಿ, ಅದರ ಸಂಸ್ಕೃತಿ ಕಾಡಿ ಕಾಡಿ ಕಾಡಿ…. ಅವಳೊಮ್ಮೆ ನಿರ್ಧರಿಸಿಯೇ ಬಿಟ್ಟಳು: ಈ ಸಿಂಧೂ ನದಿಯ ಗುಂಟ ಯಾಕೆ ಪ್ರವಾಸ ಮಾಡಬಾರದು? ಹಾಗೆ ಪ್ರವಾಸ ಮಾಡಿ ಬರೆದ ಪುಸ್ತಕವೇ ಎಂಪೈರ್‍ಸ್ ಆಫ್ ದಿ ಇಂಡಸ್ : ದಿ ಸ್ಟೋರಿ ಆಫ್ ಅ ರಿವರ್.

‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು

Saturday, June 13th, 2009

೧೯೯೭ರ ದಿನಗಳಲ್ಲಿ ನೀವು ಇಂಗ್ಲಿಶ್ ಸಿನೆಮಾ ನೋಡಬೇಕಂದ್ರೆ ಯಾವುದೋ ಸಿಡಿ ಲೈಬ್ರರಿಗೆ ಮೆಂಬರ್ ಆಗಬೇಕಿತ್ತು. ಅಂಥ ಒಂದು ದಿನ ನಾನು ಮಲ್ಲೇಶ್ವರದ ಸಿಡಿ ಲೈಬ್ರರಿಯಿಂದ ತಂದ ಸಿನೆಮಾ ‘ದಿ ಕ್ಯೂಬ್.’ ನೋಡಿದಾಗ ಇದೇನು ವಿಚಿತ್ರ ಎನ್ನಿಸಿತು. ಈ ಸಿನೆಮಾ ಮಾಡಿದ್ದು ಕೆನಡಾದ ಮಂದಿ. ಹಾಲಿವುಡ್‌ನವರು ಇದರಲ್ಲಿಲ್ಲ. ಆದರೂ ಹಾಲಿವುಡ್‌ನ ಮಿಸ್ಟರಿ ಸಿನೆಮಾಗಳನ್ನು ಮೀರಿಸುವ ಸೈನ್ಸ್ ಫಿಕ್ಷನ್ ಸಿನೆಮಾ ಆಗಿ ದಿ ಕ್ಯೂಬ್ ಪ್ರಸಿದ್ಧವಾಯಿತು. ಆಮೇಲೆ ‘ಹೈಪರ್‌ಕ್ಯೂಬ್’ ಎಂಬ ಸಿಖ್ವೆಲ್ ಬಂತು. (ಸಿಖ್ವೆಲ್: ಒಂದು ಸಿನೆಮಾದ ಮುಂದಿನ ಭಾಗದ [...]

ಬಿಜೆಪಿ : ಕೆಲವು ರಾಷ್ಟ್ರೀಯ ನಾಯಕರ ‘ಭಂಡವಾಳ’ ಇಷ್ಟಿದೆ!

Friday, June 12th, 2009

ರಾಷ್ಟ್ರ ಬಿಜೆಪಿಯಲ್ಲೂ ಗಲಾಟೆಯೋ ಗಲಾಟೆ. ನಾಯಕತ್ವದ ತಗಾದೆ! ಆದರೆ ನೀವು ಗಮನಿಸಿರಬಹುದೇನೋ, ಹೀಗೆ ಗಲಾಟೆ ಮಾಡಿದವರೆಲ್ಲ ಒಂದಲ್ಲ ಒಂದು ಹಗರಣಕ್ಕೆ ಸಿಕ್ಕಿಹಾಕಿಕೊಂಡಿರುವವರೇ!

ಕ್ಷುದ್ರ ಮನಸ್ಸಿನ ರಕ್ಕಸ ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೇ ಬ್ಲಾಗ್

Sunday, June 7th, 2009

ಈ ಬೆಂಗಳೂರು ನಗರದ ಬಗ್ಗೆ ಯಾವುದೇ ಅನುಕಂಪವನ್ನೂ ಇಟ್ಟುಕೊಳ್ಳಬಾರದು; ಅದರ ಬಗ್ಗೆ ಯಾವುದೇ ಲೇಖನವನ್ನು ಬರೆಯಬಾರದು ಎಂದು ನಾನು ಎರಡು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಸ್ವಯಂನಿರ್ಧಾರವನ್ನು ಮುರಿದು ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೆಯ ಲೇಖನವನ್ನು ಬರೆಯುತ್ತಿದ್ದೇನೆ. ಪದೇ ಪದೇ ಬೆಂಗಳೂರಿನ ತೊಂದರೆ ತಾಪತ್ರಯಗಳ ಬಗ್ಗೆ ದಿನಪತ್ರಿಕೆಗಳಲ್ಲಿ ಸುದ್ದಿಗಳನ್ನು, ಛಾಯಾಚಿತ್ರಗಳನ್ನು ನಿಮ್ಮಲ್ಲಿ ಬಹಳಷ್ಟು ಜನ ನೋಡಿರುತ್ತೀರಿ. ಹಲವು ಕಾಲಮಿಷ್ಟುಗಳು ಒಳ್ಳೆ ವಿಷಯ ಸಿಗದಿದ್ದಾಗೆಲ್ಲ ಬೆಂಗಳೂರಿನ ಸಮಸ್ಯೆಯನ್ನು ಎತ್ತಿಕೊಂಡು ಬರೆದಿದ್ದೂ ಇದೆ. ತಪ್ಪೇನಲ್ಲ. ಕೋಟಿ ತಲುಪುತ್ತಿರುವ ಜನಸಂಖ್ಯೆಯ ಈ [...]

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್