ಪತ್ರಕರ್ತರೇ, ಟೈಂ ಉಂಟಾ? 3: ಊರಾಗ ಗಲಾಟೆ ಆದಾಗ ಬಂದಿದ್ರಾ?
Friday, December 26th, 2008
ಮಳೆಗಾಲದಲ್ಲಿ ತೂಗು ಸೇತುವೆ ದಾಟಬೇಕು. ಹತ್ತಾರು ಕಿಲೋಮೀಟರ್ ಕಾಲುದಾರಿಯ ಚಾರಣ. ರಕ್ತ ಹೀರುವ ಜಿಗಣೆಗಳಿಂದ ಕಡಿಸಿಕೊಳ್ಳುವ ಆ ಪಯಣ ಸಾಧ್ಯವಿಲ್ಲ. ಅದರಲ್ಲೂ ಕರೆಂಟಿಲ್ಲದ ಊರಿನಲ್ಲಿ ಕಾಲ ಕಳೆಯಬೇಕು! ಯಾವುದಕ್ಕೂ ಹಳ್ಳಿ ನೋಡಲು ಬೇಸಿಗೆಯಲ್ಲಿ ಹೋಗೋದು ಒಳ್ಳೆಯದು. ಆಗ ಊರಿಗೆ ಬಸ್ಸು ಹೋಗುತ್ತದೆ, ಬೇಕಾದರೆ ವಾಹನದಲ್ಲಿಯೂ ಸುಲಭದಲ್ಲಿ ಒಂದೇ ದಿನಕ್ಕೆ ಹೋಗಿ ಹಿಂದಿರುಗಿ ಬರಬಹುದು. ವನವಾಸಿಗರ ಬದುಕು ಅರಿಯಲು ಉತ್ಸಾಹ ತೋರಿದ ಪತ್ರಕರ್ತನೆದುರು ಮಳೆಗಾಲ ದೊಡ್ಡ ಸಮಸ್ಯೆ. ಕಾಲದ ತಾಪತ್ರಯ ಊಹಿಸಿಯೇ ಹೆಜ್ಜೆ ಹಿಂದಕ್ಕೆ! ‘ಬೇಸಿಗೆಯಲ್ಲಿ ಹೋಗುವದು ಆರಾಮ, [...]





