ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
Monday, June 18th, 2007ಜಾಗತೀಕರಣದ ಬಗ್ಗೆ ಎಲ್ಲೆಲ್ಲೂ ಚಿಂತಕರು ಸಮಾನವಾಗಿ ಚಿಂತಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಡಾ|| ಚಂದ್ರಶೇಖರ ಕಂಬಾರರ `ಶಿಖರ ಸೂರ್ಯ’ ಎಂಬ ಕಾದಂಬರಿಯನ್ನೂ, ಮೆಲ್ ಗಿಬ್ಸನ್ನನ `ದಿ ಅಪೋಕೆಲಿಪ್ಸ್’ ಸಿನೆಮಾವನ್ನೂ ಹೋಲಿಸಿ ಒಂದು ಸುದ್ದಿಕಥೆಯನ್ನು ನಾನು `ಹೊಸದಿಗಂತ’ಕ್ಕಾಗಿ ಅರ್ಜೆಂಟಾಗಿ ಬರೆದಿದ್ದೆ. ಈ ವಿಚಾರಕ್ಕಾಗಿ ಕಂಬಾರರನ್ನು ಅಭಿನಂದಿಸಿಯೂ ಇದ್ದೆ. ತಿಳಿಗಡಲು ವಿಭಾಗದಲ್ಲಿ ಈ ಲೇಖನವನ್ನು ನೀವು ಓದಬಹುದು. ಈಗ ಈ ಪುಸ್ತಕದ ಬಗ್ಗೆಯೇ ಪ್ರತ್ಯೇಕವಾಗಿ ಬರೆಯುವಾ ಎಂದು ಹೊರಟಿದ್ದೇನೆ.

