ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
Friday, April 6th, 2007ಪೂರ್ಣಚಂದ್ರ ತೇಜಸ್ವಿ ಇನ್ನಿಲ್ಲ. ಮಾಯಾಲೋಕವನ್ನು ಕಟ್ಟಿಕೊಡುವುದಕ್ಕೆ ಹೊರಟವರು ತಾವೇ ಮಾಯಾಲೋಕಕ್ಕೆ ಹೊರಟುಹೋಗಿದ್ದಾರೆ. ಇನ್ನೇನು ಅವರ ಬರವಣಿಗೆ ಮತ್ತಷ್ಟು ಹದವಾಗಿ ನಮ್ಮ ಕುತೂಹಲ ತಣಿಸುತ್ತದೆ, ಮಾಯಾಲೋಕದ ಇನ್ನಷ್ಟು ದೃಶ್ಯಗಳು ನಮ್ಮ ಕಣ್ಣು ಕಟ್ಟುತ್ತವೆ ಎಂದೆಲ್ಲ ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿಯಾಗಿ, ತೇಜಸ್ವಿ ನಮ್ಮನ್ನು ಬಿಟ್ಟುಹೋಗಿದ್ದಾರೆ. ಮೂಡಿಗೆರೆಯ ವಿಶಿಷ್ಟ ಹಕ್ಕಿ ಗುಡ್ಡ, ಬೆಟ್ಟ ದಾಟಿ ದೂರ ದೂರ ಹಾರಿಹೋಗಿದೆ. ಮೂಡಿಗೆರೆ ಹ್ಯಾಂಡ್ಪೋಸ್ಟ್ ಗೆ ಈಗ ಖಾಲಿತನವೊಂದೇ ಸಂಗಾತಿ.

