Bhairappa’s interview 2002
Monday, February 26th, 2007S.L.Bhairappa's interview 2002
ಕಾವೇರಿ ವಿಷಯ ತಣ್ಣಗಾದ ಮೇಲೆ `ಆವರಣ’ ದ ಶಾಖ ಹಬ್ಬುವ ಲಕ್ಷಣಗಳು ಗೋಚರಿಸುತ್ತಿವೆ.
ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
ಐದು ವರ್ಷಗಳ ಹಿಂದಿನ ಮಾತು. ನಾನು ಆಗ ದಿನಪತ್ರಿಕೆಯೊಂದರ ಮ್ಯಾಗಜಿನ್ಗಾಗಿ ಎಸ್.ಎಲ್. ಭೈರಪ್ಪನವರ ಸಂದರ್ಶನ ಮಾಡಲು ಇಬ್ಬರು ಸಹೋದ್ಯೋಗಿಗಳೊಂದಿಗೆ ಮೈಸೂರಿಗೆ ಹೋಗಿದ್ದೆ. ಭೈರಪ್ಪನವರ ಮನೆಯಲ್ಲೇ ಇಡೀ ದಿನ ವಾಸ. ಬೆಳಗ್ಗೆಯಿಂದ ಸಂಜೆವರೆಗೆ ಅವರ ಆತಿಥ್ಯದ ನಡುವೆಯೇ ಸಂದರ್ಶನ. ಇನ್ನಷ್ಟೇ ಬಿಡುಗಡೆಯಾಗಲಿರುವ `ಮಂದ್ರ’ದ ನೆರಳಿನಲ್ಲಿ ಈ ಸಂದರ್ಶನಕ್ಕೆ ವಿಶೇಷ ಮಹತ್ವ ಬಂದಿತ್ತು.
[...]