ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ : ಎಸ್೨ಸಿ ಸಂಸ್ಥೆಯ ಈ ಕನಸಿಗೆ ತಳಬುಡವೇ ಇಲ್ಲ!

Wednesday, September 8th, 2010

ಭಾರತದಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆಗೆ ಪರಿಹಾರವಾಗಿ ಅಮೆರಿಕಾದ ಎಸ್೨ಸಿ ಗ್ಲೋಬಲ್ ಸಿಸ್ಟಮ್ಸ್ ಎಂಬ ಸಂಸ್ಥೆಯು ಅಲಾಸ್ಕಾದಿಂದ ಪರಿಶುದ್ಧ ನೀರನ್ನು ಕಾರ್ಗೋ ಹಡಗುಗಳ ಮೂಲಕ ತಂದು ಮಾರಲು ನಿರ್ಧರಿಸಿದೆ. ಮುಂದಿನ ಆರೆಂಟು ತಿಂಗಳಲ್ಲೇ ಈ ಯೋಜನೆ ಸಾಕಾರಗೊಳ್ಳಲಿದೆ ಎಂದು ಸಂಸ್ಥೆಯು ಪ್ರಕಟಿಸಿದೆ. ಆದರೆ ಈ ಸಂಸ್ಥೆಯ ಹಣಕಾಸಿನ ಸಾಮರ್ಥ್ಯ, ಅಲಾಸ್ಕಾದಿಂದ ನೀರೆತ್ತುವುದರಲ್ಲಿ ಇರುವ ಸಮಸ್ಯೆಗಳು, ಭಾರತದ ನೀರಿನ ಅಗತ್ಯ – ಇವನ್ನೆಲ್ಲ ಗಮನಿಸಿದರೆ ಇದೊಂದು ಅಪ್ಪಟ ಕಮರ್ಶಿಯಲ್ ಕನಸೇ ಹೊರತು ಯಾವುದೇ ಸಾಮಾಜಿಕ ಉದ್ದೇಶವೂ ಇದರಲ್ಲಿಲ್ಲ ಎಂಬುದು [...]

ನಿತಿನ್ ಗಡ್ಕರಿಯ ರಶ್ಯಾ ಮಿತ್ರ ವಿಕ್ಟರ್ ಪೆಟ್ರಿಕ್ ನಿಜಕ್ಕೂ ಸಂಶೋಧಕರೆ?

Sunday, September 5th, 2010

ನಿರಂತರ ಚಲಿಸುವ ಯಂತ್ರ, ನೀವು ಉಸಿರಾಡಿದರೇ ಸಾಕು, ವಿದ್ಯುತ್ತನ್ನು ಉತ್ಪಾದನೆ ಮಾಡುವ ಬಟ್ಟೆ, ಪರಮಾಣು ವಿಕಿರಣಯುಕ್ರ ನೀರನ್ನು ಪರಿಶುದ್ಧವಾಗಿಸುವ ವಿಧಾನ, ಎಲ್ಲಕ್ಕಿಂತ ಮುಖ್ಯವಾಗಿ ನೀರನ್ನು ಈಗಿರುವ ಎಲ್ಲ ತಂತ್ರಜ್ಞಾನಗಳಿಗಿಂತ ೩೫೦ಕ್ಕೂ ಹೆಚ್ಚುಪಟ್ಟು ಶುದ್ಧೀಕರಿಸುವ ಸಾಧನ – ಇವೆಲ್ಲವನ್ನೂ ಕಂಡುಹಿಡಿದವರು ಯಾರು? ಅಥವಾ ಕಂಡು ಹಿಡಿದಿದ್ದೇನೆ ಎಂದವರು ಯಾರು? ಅವರೇ ವಿಕ್ಟರ್ ಐವಾನೋವಿಚ್ ಪೆಟ್ರಿಕ್.  ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರು ಇದೇ ಸೆಪ್ಟೆಂಬರ್ ೬ರಿಂದ ಮಾಡಲಿರುವ ರಶ್ಯಾ ದೇಶದ ಪ್ರವಾಸದ ಸಂಘಟಕರೇ ಈ ವಿಕ್ಟರ್ [...]

ವೇದಾಂತ : ಅಗೆದಷ್ಟೂ ಅವಾಂತರ

Sunday, September 5th, 2010
ವೇದಾಂತ : ಅಗೆದಷ್ಟೂ ಅವಾಂತರ

ನೀವು ಒಡಿಶಾ(ಒರಿಸ್ಸಾ)ದ ರಾಯ್‌ಪುರ, ರಾಂಚಿ ಅಥವಾ ಭುವನೇಶ್ವರಕ್ಕೆ ಹೋದಲ್ಲಿ ನಿಮ್ಮನ್ನು ಸ್ವಾಗತಿಸುವುದು ಅಭ್ಯುದಯದ ಹೇಳಿಕೆಗಳನ್ನು ಹೊತ್ತ ಬೃಹತ್ ಹೋರ್ಡಿಂಗ್‌ಗಳು. ಕಲಹನಿ (ಕಲಹಂದಿ) ಜಿಲ್ಲೆಯೇ ಭವ್ಯವಾಗಿ ರೂಪಾಂತರಗೊಳ್ಳುತ್ತಿದೆ, ಒಡಿಶಾ ರಾಜ್ಯದಲ್ಲಿ ಸುಖವನ್ನು ಅಗೆಯಲಾಗುತ್ತಿದೆ – ಇತ್ಯಾದಿ ಘೋಷಣೆಗಳನ್ನು ನೋಡಿ ನೀವು ನಿಬ್ಬೆರಗಾಗುತ್ತೀರಿ. ಛಪ್ಪನ್ ಸಾಲಾರ್ ಬರಗಾಲದಂಥ ಭೀಕರ ಬರಗಾಲಗಳ ಸರಣಿಯಿಂದ ತತ್ತರಿಸಿದ, ಹಸಿವಿನ ಸಾವುಗಳಿಗೆ ಕುಪ್ರಸಿದ್ಧವಾದ ಕಲಹನಿ ಜಿಲ್ಲೆ ಈಗ ಸುಖೀ ಬದುಕಿನ ಸ್ವರ್ಗವಾಗಿದೆಯೆ ಎಂದು ನೀವು ಅಚ್ಚರಿಗೆ ಬೀಳುತ್ತೀರಿ.

[...]

ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ

Wednesday, September 1st, 2010
ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ

ಆನೆಯನ್ನು ರಾಷ್ಟ್ರೀಯ ಪರಂಪರೆ ಪ್ರಾಣಿ ಎಂದು ಘೋಷಿಸಲಿದೆ ಎಂದು  ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಜೈರಾಂ ರಮೇಶ್ ಪ್ರಕಟಿಸಿದ್ದಾರೆ. ಹುಲಿಗೆ ಸಿಕ್ಕ ಮಾನ – ಮರ್ಯಾದೆಯನ್ನೇ ಆನೆಗೂ ಕೊಡಲು ರಾಷ್ಟ್ರೀಯ ಆನೆ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸುವುದಾಗಿಯೂ ಅವರು ಪ್ರಕಟಿಸಿದ್ದಾರೆ. ಆನೆ ಕುರಿತ ಕಾರ್ಯಪಡೆಯ ವರದಿಯನ್ನು ಬಿಡುಗಡೆ ಮಾಡಿ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ. ಕೊನೆಗೂ ಆನೆಗೂ ಕೊಂಚ ಹೆಚ್ಚಿನ ಸ್ಥಾನ – ಮಾನ – ಸಂರಕ್ಷಣೆ ಸಿಗೋ ಲಕ್ಷಣಗಳು ಕಾಣುತ್ತಿವೆ.

[...]

ಮುಗಿದಿಲ್ಲ ಬಿಟಿ ಬದನೆ ಚರ್ಚೆ: ಇಲ್ಲಿವೆ ಕೆಲವು ‘ಕೇಳೋ’ ಮಾತುಗಳು

Thursday, May 27th, 2010

ಮೇ ೨೬ರಂದು ಬೆಂಗಳೂರಿನ ಅರಣ್ಯ ಭವನದಲ್ಲಿ ಬಿಟಿ ಬದನೆ ಮತ್ತು ಜೀವವೈವಿಧ್ಯ ಕುರಿತಂತೆ ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಒಂದು ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರವನ್ನು ಉದ್ಘಾಟಿಸಿದ ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಸದಸ್ಯ ಪ್ರೊ. ಬಿ. ಎಂ.ಕುಮಾರಸ್ವಾಮಿ ಮಾಡಿದ ಆರಂಭಿಕ ಭಾಷಣ ಇಲ್ಲಿದೆ. ಅಲ್ಲದೆ ರಾಜ್ಯ ಜೈವಿಕ ಇಂಧನ ಕಾರ್ಯಪಡೆ ಅಧ್ಯಕ್ಷ ಶ್ರೀ ವೈ. ಬಿ. ರಾಮಕೃಷ್ಣ ಮತ್ತು ಎನ್‌ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ (ಇಎಸ್‌ಜಿ)ಯ ಶ್ರೀ ಲಿಯೋ ಸಲ್ಡಾನಾ ಮಾಡಿದ ಕಿರು ನಿರೂಪಣೆಯೂ ಇಲ್ಲಿದೆ.
[...]

Future Electricity Supply Options for India

Friday, April 30th, 2010

Synopsis: The country is facing multitude of problems in power sector.  Despite huge investments since independence and considerable increase in generating capacity, electricity is still out of reach for about 40% of the population. In the backdrop of escalating demand for electricity, the social, economic and environmental implications of large addition of conventional power stations, [...]

How essential is the nuclear power option for India?

Friday, April 30th, 2010

 The debate as to whether nuclear power is a safe, suitable and essential option for India has been going on for many decades. While the proponents of the nuclear power have been offering many arguments in favour of the option, there have been any numbers of issues raised by those who think it is not [...]

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್